ಎಲ್ಲರಿಗೂ ನಮಸ್ಕಾರ…
ರಾಜ್ಯದಲ್ಲಿ ಈಗಾಗಲೇ ರೈತರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿದ್ದು ಅಂದರೆ ಭಾರಿ ಪ್ರಮಾಣದ ಬೆಳೆ ಹಾನಿ ಉಂಟಾಗಿದ್ದು ಸರ್ಕಾರದಿಂದ ಈಗಾಗಲೇ ಕೆಲವು ಜಿಲ್ಲೆಗಳಿಗೆ ಬರ ಪರಿಹಾರ ನೀಡಲು ಮುಂದಾಗಿದೆ ಈ ಬಗ್ಗೆ ಈಗಾಗಲೇ ಮಾಧ್ಯಮಗಳ ಮುಂದೆ ಕೆಲವು ಬರ ಪರಿಹಾರ ನೀಡುವ ಜಿಲ್ಲೆಗಳ ಹೆಸರನ್ನು ಕೂಡ ಆದೇಶಿಸಿದೆ, ಇನ್ನೂ ರೈತರಿಗೆ ಬರ ಪರಿಹಾರದ ಹಣವನ್ನು ನೀಡಲು ಸರ್ಕಾರದಿಂದ ಕೆಲವು ಸೂಚನೆಗಳನ್ನು ನೀಡಿದೆ ಬರ ಪರಿಹಾರದ ಹಣ ಪಡೆಯಲು ರೈತರ ಆಧಾರ್ ಕಾರ್ಡ್ ಮತ್ತು ಪಹಣಿ ಜೋಡಣೆ ಮಾಡಿಸಿ FID ಮಾಡಲು ತಿಳಿಸಿದೆ.
ರಾಜ್ಯದ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ.!
ರಾಜ್ಯದ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ ಬಂದಿದ್ದು ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ಸರ್ಕಾರದಿಂದ ರಾಜ್ಯದ ಕೆಲವು ಜಿಲ್ಲೆಗಳಿಗೆ ಬರ ಪರಿಹಾರ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ ಇನ್ನು ಸರ್ಕಾರ ಯಾವ ರೈತರಿಗೆ ಎಷ್ಟು ಬರ ಪರಿಹಾರ ಹಣ ಸಿಗಬೇಕು ಹಾಗೆ ಬೆಳೆ ಪರಿಹಾರ ಪಡೆಯುವ ರೈತ ಎಷ್ಟು ಭೂಮಿಯನ್ನು ಓದಿದ್ದಾನೆ ಎಂಬ ಮಾಹಿತಿ ಪಡೆದು ರಾಜ್ಯ ಸರ್ಕಾರವು ರೈತರಿಗೆ ಬರ ಪರಿಹಾರ ಹಣವನ್ನು ನೀಡಲು ಮುಂದಾಗಿದೆ ಹಾಗಾಗಿ ರೈತರಿಗೆ FID ಮಾಡಿಸಬೇಕಾಗಿ ಸೂಚನೆ ನೀಡಿದೆ.
FID ಎಂದರೆ ಏನು. FID ಮಾಡಿಸುವುದು ಹೇಗೆ.?
ಸದ್ಯ ಈ ಬಗ್ಗೆಯೂ ರಾಜ್ಯ ಸರ್ಕಾರವೇ ರೈತರಿಗೆ ಸೂಚನೆ ನೀಡಿದ್ದು ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್ಐಡಿ ಮಾಡಿಸಲೇಬೇಕು ಒಂದು ವೇಳೆ ಎಫ್ ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ ಹೆಣ್ಣು ಇದನ್ನು ಮಾಡಿಸಲು ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್ ಐಡಿ ಮಾಡಿಸಬೇಕಾಗಿ ತಿಳಿಸಿದೆ.
FID ಮಾಡಿಸಲು ರೈತರು ಹತ್ತಿರದ ಸಾಮಾನ್ಯ ಸೇವ ಕೇಂದ್ರಕ್ಕೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ತಮ್ಮ ಆಧಾರ್ ಕಾರ್ಡ್ ರೈತನ ಬರ ಪರಿಹಾರ ಪಡೆಯಬೇಕಾದ ಜಮೀನಿನ ಪಹಣಿ ಬ್ಯಾಂಕ್ ಪಾಸ್ ಬುಕ್ ತಮ್ಮ ಮೊಬೈಲ್ ಸಂಖ್ಯೆ ಹೊಂದಿಗೆ ಹೋಗಿ ಎಫ್ಐಡಿ ಮಾಡಿಸಬೇಕು ಇದಕ್ಕೆ ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮತ್ತದಿಂದ ರೈತರು ವಂಚಿತರಾದ ಬೇಕಾಗುತ್ತದೆ.
FID ಅನ್ನು ನಿಮ್ಮ ಮೊಬೈಲಲ್ಲಿ ನೋಂದಣಿ ಮಾಡುವುದು ಹೇಗೆ.?
ಬೆಳೆ ಸಾಲ ಪಡೆಯುವ ಸಮಯದಲ್ಲಿ ಈ ಫ್ರೂಟ್ಸ್ ನಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿದೆ, FID ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಶಿಯರಿ ಇನ್ಫಾರ್ಮಶನ್ ಸಿಸ್ಟಮ್ ಇದು ಕೃಷಿ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದೇ ಸೂರಿನಡಿದಿಟ್ಟುಕೊಳ್ಳುವ ಪೋರ್ಟಲ್. ನೀವು ಇದನ್ನು ಮಾಡಲೇಬೇಕಾಗಿರುತ್ತದೆ ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಮಾಡಲು.
- ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
- https://fruits.karnataka.gov.in
- ನಂತರ ಒಂದು ಪೇಜ್ ತೆರೆದುಕೊಳ್ಳುತ್ತದೆ ಅದರಲ್ಲಿ ಸಿಟಿಜನ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಆಧಾರ್ ನಂಬರ್ ಹಾಕಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
- ಕೊನೆದಾಗಿ ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ಹಾಕಿ ಪ್ರೋಸೀಡ್ ಮೇಲೆ ಕ್ಲಿಕ್ ಮಾಡಿ
- ನಂತರ ಒಟಿಪಿ ಬರುತ್ತದೆ ಓಟಿಪಿ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಂತರ ಪಾಸ್ವರ್ಡ್ ಕ್ರಿಯೇಟ್ ಮಾಡಿ ಲಾಗಿನ್ ಆಗಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಇದರಲ್ಲಿ ಸಿಗಲಿದೆ
ಈ ರೀತಿ ಕೆಲವೊಂದು ಪ್ರಕ್ರಿಯೆ ಬಳಿಕ ಈ ಬರ ಪರಿಹಾರ ಪಡೆಯಲು ಎಫ್ ಐ ಡಿ ಗೆ ಅರ್ಜಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೆಲವೇ ದಿನಗಳ ಕಾಲಾವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿನ ಮೇಲೆ ಬರ ಪರಿಹಾರದ ಹಣವನ್ನು ಪಡೆದುಕೊಳ್ಳಿ ಧನ್ಯವಾದಗಳು..