ಎಲ್ಲರಿಗೂ ನಮಸ್ಕಾರ..
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರೈತರ ವಿದ್ಯುತ್ ಕೊರತೆ ನೀಗಿಸಲು ಒಂದು ಹೊಸ ಕ್ರಮವನ್ನು ಕೈಗೊಂಡಿದ್ದಾರೆ ಈಗಾಗಲೇ ರೈತರಿಗೆ ಮಳೆ ಬರದ ಕಾರಣ ನೀರಿನ ಸಮಸ್ಯೆ ಉಂಟಾಗಿದ್ದು ಇದರ ಮಧ್ಯೆ ಸರ್ಕಾರದಿಂದ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇನೆ ಎಂದು ರೈತರ ವಿದ್ಯುತ್ ನಲ್ಲಿ ಏರುಪೇರು ಮಾಡುತ್ತಿದೆ ಹಾಗಾಗಿ ರೈತರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಇದನ್ನೆಲ್ಲಾ ಗಮನಿಸಿದ ರಾಜ್ಯ ಸರ್ಕಾರ ರೈತರ ವಿದ್ಯುತ್ ಕೊರತೆಯನ್ನು ನೀಗಿಸಲು ಹೊಸ ಕ್ರಮವನ್ನು ಕೈಗೊಂಡಿದೆ. ನೀವು ಕೂಡ ರೈತರಾಗಿದ್ದು ನಿಮಗೂ ಕೂಡ ವಿದ್ಯುತ್ ಕೊರತೆ ಉಂಟಾಗಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈತರ ವಿದ್ಯುತ್ ಕೊರತೆ ನೀಗಿಸಲು ಹೊಸ ಕ್ರಮ ಕೈಗೊಂಡ ಸರ್ಕಾರ.!
ರಾಜ್ಯದಲ್ಲಿ ಮಳೆ ಹೆಚ್ಚಾಗಿ ಆಗದ ಕಾರಣ ಈಗಾಗಲೇ ಮುಂಗಾರು ಬೆಳೆ ಬಹಳಷ್ಟು ಕಡೆ ನಾಶ ಆಗಿದೆ ಅಲ್ಲದೆ ರಾಜ್ಯದಲ್ಲಿ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗಿದೆ ಹಾಗಾಗಿ ಈಗಾಗಲೇ ರಾಜ್ಯ ಸರ್ಕಾರ ರಾಜ್ಯದ ಕೆಲವು ತಾಲೂಕುಗಳಿಗೆ ಬರ ಪರಿಹಾರ ನೀಡಲು ಕೂಡ ಆದೇಶ ನೀಡಿದೆ ಆದರೆ ಇನ್ನುಳಿದ ಕೆಲವು ತಾಲೂಕುಗಳಲ್ಲಿ ಬೆಳೆ ಫಲ ನೀಡುವ ಹಂತಕ್ಕೆ ಬಂದಿದ್ದರು ನೀರಿನ ಸಮಸ್ಯೆಯಿಂದ ಬೆಳೆ ಹಾಳಾಗುತ್ತಿದೆ ಕಾರಣ ರೈತರ ವಿದ್ಯುತ್ ಕೊರತೆ.
ಹೌದು ಸರ್ಕಾರದಿಂದ ಗೃಹ ಜ್ಯೋತಿ ಯೋಜನೆ ಎಂದು ಉಚಿತ ವಿದ್ಯುತ್ ನೀಡಿ ವಿದ್ಯುತ್ ಬೆಲೆ ಕೂಡ ಹೆಚ್ಚಳ ಮಾಡುತ್ತಿದೆ ಆದರೆ ರೈತರಿಗೆ ನೀಡುತ್ತಿದ್ದಂತಹ ವಿದ್ಯುತ್ ಪೂರೈಕೆ ಕೂಡ ಕಡಿಮೆ ಮಾಡಲಾಗಿದೆ ಆದ್ದರಿಂದ ರೈತರ ಬೆಳೆ ನಾಶ ಆಗುತ್ತಿದ್ದು ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ರೈತರ ವಿದ್ಯುತ್ ಕೊರತೆ ನೀಗಿಸಲು ಕ್ರಮ ಕೈಗೊಂಡಿದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ ವಿಚಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಹೊಸ ಹೇಳಿಕೆ.?
ರೈತರಿಗೆ ಪ್ರತಿ ದಿನ 5 ಗಂಟೆಗಳ ವಿದ್ಯುತ್ ಪೂರೈಕೆಗೆ ಸೂಚನೆ.?
ರೈತರಿಗೆ ಸರ್ಕಾರದಿಂದ ಇದೇ ದಸರ ಪ್ರಯುಕ್ತ ಕೆಲವು ಹೊಸ ಕ್ರಮಗಳನ್ನು ಕೈಗೊಂಡಿದ್ದು ಆ ಕ್ರಮಗಳ ಆದೇಶ ಕೂಡ ಮಾಡಿದೆ ಇನ್ನು ರೈತರಿಗೆ ಪ್ರತಿದಿನ ಐದು ಗಂಟೆಗಳ ವಿದ್ಯುತ್ ಪೂರೈಕೆಗೆ ಸೂಚನೆಯನ್ನು ನೀಡಲಾಗಿದೆ, ಇನ್ನು ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದ್ದು ರೈತರಿಗೆ ಸಮಸ್ಯೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಪಕ್ಕದ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ಸೂಚನೆಯನ್ನು ನೀಡಲಾಗಿದೆ ಹೇಗೆ ಸರ್ಕಾರದಿಂದ ರೈತರ ವಿದ್ಯುತ್ ಪೂರೈಕೆಗೆ ಹೊಸ ಕ್ರಮಗಳನ್ನು ಕೈಗೊಂಡಿದ್ದು ಆಕ್ರಮಗಳು ಈ ಕೆಳಗಿನಂತಿವೆ.
- ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದರಿಂದ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು ಗರಿಷ್ಠ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರೀಡಿಗೆ ಪೂರೈಸುವಂತೆ ಆದೇಶ.
- ರಾಜ್ಯದ ಶಾಕೋತ್ಪನ ವಿದ್ಯುತ್ ಘಟಕಗಳಿಗೆ ಮರುಚಾಲನೆ
- ಕಲ್ಲಿದ್ದಲು ಸಂಸ್ಥೆಗಳಿಂದ 15 ಲಕ್ಷ ಮೆಟ್ರಿಕ್ ಟನ್ ಪಡೆಯಲು ಕ್ರಮ
- ಕೆಪಿಸಿಎಲ್ ಅನಿಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ಆರಂಭಕ್ಕೆ ಕ್ರಮ
- ಪಾವಗಡದಲ್ಲಿ ಮತ್ತು ಕಲಬುರ್ಗಿಯಲ್ಲಿ ಹೆಚ್ಚುವರಿ ವಿದ್ಯುತ್ ಗಾಗಿ ಸೋಲಾರ್ ಪಾರ್ಕ್ ಸ್ಥಾಪನೆ
ಹೀಗೆ ರಾಜ್ಯ ಸರ್ಕಾರದಿಂದ ರೈತರ ವಿದ್ಯುತ್ ಕೊರತೆ ನೀಗಿಸಲು ಇದೇ ದಸರಾ ಪ್ರಯುಕ್ತ ರೈತರಿಗಾಗಿ ಈ ಎಲ್ಲಾ ಹೊಸ ಆದೇಶಗಳನ್ನು ನೀಡಿದೆ ಇದರಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕೊರತೆಯನ್ನು ನೀಗಿಸಲು ಅನುಕೂಲ ಆಗಲಿ ಎಂದು ಇದರಿಂದ ರೈತರ ವಿದ್ಯುತ್ ಕೊರತೆಗೆ ಕಡಿವಾಣ ಬೀಳಲಿದೆ ಧನ್ಯವಾದಗಳು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಬಿಡುಗಡೆ ವಿಚಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಹೊಸ ಹೇಳಿಕೆ.?